Tuesday, January 8, 2013

ಬಿಡದೆ ಕಾಡುವ ಪ್ರಶ್ನೆಗಳು


 ಕೆಲವು ಘಟನೆಗಳು ಹಲವು ಸಲ ಜಿಜ್ಞಾಸೆಗಳಾಗಿಯೇ ಉಳಿದು ಬಿಡುತ್ತವೆ. ಹೀಗೇಕೆ ಅರ್ಥವಾಗದೇ ಬರೀ ಪ್ರಶ್ನೆಯಾಗುವುದೇಕೊ ಅರ್ಥವಾಗುವುದಿಲ್ಲ. ಇತ್ತಲಾಗಿ ಒಂದು ಸಲ ರಾತ್ರಿ ರೈಲಿನಲ್ಲಿ ಪಯಣಿಸುತ್ತಿದ್ದೆ. ಮಂಗಳೂರಿಗೆ ಹೋಗುವ ಬಂಡಿಯದು. ರೈಲಿನ ಕೆಲವು ಸೀಟುಗಳು ಖಾಲಿ ಇದ್ದುವು. ಒಂದೊಂದು ಭೋಗಿಯಲ್ಲಿ ಕೆಲವು ಕೋಣೆಗಳು ಖಾಲಿ ಇದ್ದಂತೆ ನಿಶ್ಯಭ್ದವಾಗಿತ್ತು. ರಾತ್ರಿ ಹೊತ್ತು ಬಹಳಷ್ಟು ಸರಿದಿತ್ತು. ಇದ್ದ ಬಹಳಷ್ಟು ಜನ ಸೀಟು ಬಿಡಿಸಿ ರೈಲಿನ ಜೋಗುಳಕ್ಕೆ ಕಿವಿಕೊಟ್ಟಿದ್ದರು. ನನ್ನದು ಕೆಳ ಬದಿಯ ಸೀಟು. ಪಕ್ಕದ ಸೀಟುಗಳೆರಡರಲ್ಲಿ ಗಂಡು ಹೆಣ್ಣು ಜೋಡಿಯೊಂದು ಪಿಸುಗುಟ್ಟುತ್ತಾ ಇದ್ದಿತ್ತು. ಅದೇನು ಮಾತೋ ... ರೈಲಿನ ಬಹಳಷ್ಟು ಪ್ರಯಾಣಿಕರು ಗಮನಿಸುವಷ್ಟರ ಮಟ್ಟಿಗೆ ತುಸು ಹೆಚ್ಚೇ ಇವರ ಹೃದಯ ವಿನಿಮಯ ನಡೆಯುತ್ತಿತ್ತು. ಸಭ್ಯತೆ ಎಂಬ ಒಂದು ನಾಗರೀಕ ಭಾವನೆ ಇದ್ದರೆ.. ಕೆಲವೊಮ್ಮೆ ಇದು ಇದೆ ಅಂತ ತಿಳಿದುಕೊಳ್ಳುವುದು ಅಪರಾಧವಾಗಿಬಿಡುತ್ತದೆ. ಅದರ ಎಲ್ಲೆ ಮೀರಿದ ವರ್ತನೆ. ಈಗೀಗ ಎಲ್ಲ ಅಭಾಸಗಳು.. ಕೇವಲ ವಿರೋಧಾಭಾಸಗಳೇ ಇದನ್ನೂ ಹಾಗೇ ತಿಳಿಯಬಹುದು. ಕೆಲವೊಮ್ಮೆ ಇಂತಹ ಸಂದರ್ಭದಲ್ಲಿ ಜಿಜ್ಞಾಸೆಗಳು ಮೂಡುತ್ತವೆ... ಬಹುಶಃ ಎಕಾಂತದಲ್ಲಿ, . ಅಂತರಂಗದಲ್ಲಿ, . ಅಂದರೆ ಮನೆಯ ಅಂತಃ ಪುರದಲ್ಲಿ ಪರಸ್ಪರ ಘರ್ಷಣೆ ಜಗಳ.. ಏನು ಅಂತರಂಗದಲ್ಲಿ ಇರಬೇಕೋ ಅದು ಬಹಿರಂಗದಲ್ಲಿರುತ್ತವೆಯೋ ಎನೋ? ಒಟ್ಟು ಜಿಜ್ಞಾಸೆ.. ಸಾಮಾನ್ಯವಾಗಿ ಹೆಣ್ಣು ಸುಂದರ ಹೂವಿಗೆ ಹೋಲಿಸುತ್ತಾರೆ..ಹಲವು ಕಾರಣಗಳಿರಬಹುದು.. ಮುಟ್ಟಿದರೆ ನಲುಗಿ ಬಿಡುವ ಮೃದು ಕುಸುಮ .. ಮೈಮೇಲೆ ಅದ್ದಿಕೊಂಡರೂ ತುಸು ನಲುಗದ ಹಾಗೆ ವಾಸ್ತವವಾಗುವಾಗ ಯಾಕೆ ಹೀಗೆ? ಸಹಜತೆಯನ್ನು ಮೀರಿದ ಚೆಲ್ಲಾಟ ಇಂದ್ರಿಯತ್ವದ ನಿಗ್ರಹಕ್ಕೆ ಪರೀಕ್ಷೆಯನ್ನು ತಂದೊಡ್ದುತ್ತವೆ.. ಇರಲಿ..

ಮನಸ್ಸನ್ನು ಸ್ವಲ್ಪ ಉಲ್ಲಸಿತವಾಗಿಸುವುದಕ್ಕೆ ವಾಯು ವಿಹಾರಕ್ಕೆ..ಹೋದರೆ ಇನ್ನೂ ಹೈಸ್ಕೂಲು ಮುಗಿಸಿದ ಪಡ್ಡೆಗಳು ಸಿನಿಮಾದ ಯುಗಳ ದೃಶ್ಯದ ಅನುಕರಣೆ ಮಾಡುವುದು ಮಾತ್ರವಲ್ಲ ತಂತ್ರಜ್ಞಾನದ ಸದುಪಯೋಗವನ್ನು ಮಾಡುವುದು.. ತಮ್ಮ ಮೊಬೈಲ್ ನಲ್ಲಿ ತಮ್ಮ ಬಾವೋದ್ವೇಗವನ್ನು ಸೆರೆ ಹಿಡಿವ ಕಸರತ್ತು ಪುನಃ ತಲೆಯೆತ್ತುವ ಜಿಜ್ಞಾಸೆ ವಯೋಸಹಜವಾಗಿ ಪ್ರಕಟವಾಗಬೇಕಾದದ್ದು ಯಾಕೆ ಬೇಗನೇ ಪ್ರಕಟವಾಗುತ್ತದೆ? ಇರಲಿ..

ಮನೆಯಲ್ಲಿ ಎಲ್ಲರೂ ಟೀವಿಯಲ್ಲಿ ಬರುವ ಸಿನಿಮಾ ಹಾಡು ನರ್ತನ ನೋಡುತ್ತಿದ್ದಾರೆ.. ಹುಡುಗ ಪ್ಯಾಂಟ್ ಶರ್ಟ್.. (ಹೀಗೆ ಹೇಳಿದರೆನೇ ಸೂಕ್ತ) ಧರಿಸಿ.. ದೇಹ ಬಹುಭಾಗ ತೋರಿಸಲು ನಾಚಿಕೊಂಡಿದ್ದಾನೋ.. ಅಥವಾ ಪೂರ್ಣ ದಿರಿಸಿನಲ್ಲಿ ಇರುವುದು ಅಸಭ್ಯತೆಯೋ ಯಾಕೆಂದರೆ ಅಸಭ್ಯತೆಯ ದರ್ಶನ ನಮಗೆ ಪ್ರಿಯವಾಗುತ್ತದೆ..! ಹೀಗೆ ಪೂರ್ಣ ಉಡುಗೆಯಲ್ಲೇ ಇದ್ದರೆ.. ಆತನ ಕನಸಿನ ಕನ್ಯೆ ಪ್ರೇಯಸಿ .. ಇದಕ್ಕೆ ತದ್ವಿರುದ್ದವಾಗಿ ಯಾಕೆ ಇರುತ್ತಾಳೋ ತಿಳಿಯದು.. ಬಹಳಷ್ಟನ್ನು ಪ್ರಿಯತಮನಿಗೆ ತೋರಿಸುವ ತುಡಿತವೋ ಅಲ್ಲ ಕನಸಿನ ಕನ್ಯೆಯ ಕನಸನ್ನು ಹುಡುಗ ಕಾಣುವ ಪರಿಯೋ ಅಂತು ಅಂತರಂಗ ಬಹಿರಂಗ ಒಂದಾಗಿದ್ದಂತೆ ತೋರುತ್ತಿತ್ತು ..ಅಗಲೂ ಜಿಜ್ಞಾಸೆ ಯಾಕೆ ಹೀಗೆ? ಇರಲಿ

ಹೊರ ಪ್ರಪಂಚದಲ್ಲಿ ಹೀಗೆ ಬಹಿರಂಗವಾಗುವ ಅಂತರಂಗ ಸತ್ಯಗಳು ಇಂದ್ರಿಯ ನಿಗ್ರಹಕ್ಕೆ ಸವಾಲನ್ನು ತಂದೊಡ್ಡುವಾಗ ಅನ್ನಿಸುತ್ತದೆ ಇಲ್ಲಿ ಅತಿಯೆನಿಸುವ ಆಚಾರಸಂಹಿತೆ ಇದೆಯೇ? ಅಚಾರ ಮೀರುವುದೇ ಪ್ರಕೃತಿ ಸಹಜ ಅಂತ ಅನ್ನಿಸುವುದು ಯಾಕೆ? ನೋಡುವ ಕಣ್ಣಿಗೆ ಚಿಕಿತ್ಸೆ ತೆಗೆದು ಕೊಳ್ಳೋಣ ವೆಂದರೂ....ಜಿಜ್ಜಾಸೆಗಳು ಕಾಡುತ್ತವೆಯಲ್ಲ....

ಕಳ್ಳತನ ಅಪರಾಧ.. ಕಾನೂನು ವಿರೋಧವಾದದ್ದು.. ಕಳ್ಳತನ ಮಾನಸಿಕ ರೋಗದಿಂದ ಬರುತ್ತದೆ ಚಿಕಿತ್ಸೆ ಅನಿವಾರ್ಯ....ಹೌದು. ಆದರೆ ಕಳ್ಳತನ ಅಪರಾಧ.. ಹಾಗಾಗಿ ಕಳ್ಳ ಮನೆಗೆ ಬಂದು ಕದಿಯಲಾರ ಬಂದರೆ ಅವನಿಗೆ ಮಾನಸಿಕ ಚಿಕಿತ್ಸೆ ಅಗತ್ಯ .. ಎಂದು ಭಾವಿಸಿ ಮನೆಯ ಬಾಗಿಲು ಭದ್ರ ಪಡಿಸದೇ ಇರಬಹುದೇ? ಬಾಗಿಲು ತೆರೆದಿಟ್ಟು ಕಳ್ಳ ಅಪರಾಧ ಮಾಡಿದ್ದಾನೆ ಎನ್ನಬಹುದೇ? ಕೆಲವೊಮ್ಮೆ ಜಿಜ್ಞಾಸೆ ಹೀಗೂ ಕಾಡುತ್ತದೆ....

ಕೇವಲ ತಮ್ಮ ಉದ್ವೇಗ ಭಾವನೆಗಳನ್ನು ತಡೆ ಹಿಡಿಯಲಾಗದೇ ಇರುವಾಗ ಇನ್ನೂಬ್ಬರ ಭಾವೋದ್ವೇಕಕ್ಕೆ ಪರೀಕ್ಷೆಯನ್ನಿಟ್ಟು.. ಆ ಭಾವೋದ್ವೇಗವನ್ನು ಅಪರಾಧ ಎಂದು ಹೇಳುವುದು ಹೇಗೆ?
ಹೀಗಿದ್ದರೂ ಅಪರಾಧ ನಿಜಕ್ಕೂ ಅಮಾನುಷವೇ.. ಬಹಳ ಕ್ರೂರ.. ಅದರೂ.. ಒಂದು ಜಿಜ್ಞಾಸೆ ಅಲ್ಲದೆ ಮತ್ತೇನು.

ಇನ್ನೂ ಈ ಜಿಜ್ಞಾಸೆಗಳು ಮೊಳಕೆಯೊಡೆದರೆ ಅದು ಹೀಗೆ ವ್ಯಕ್ತವಾದರೆ.. ನನಗೂ ಚಿಕಿತ್ಸೆಯ ಅನಿವಾರ್ಯತೆ ಉಂಟೋ ಎನೋ..ಕೊನೆಗೆ ಅದೂ ಒಂದು ಜಿಜ್ಞಾಸೆ..!!!