Tuesday, July 22, 2025

ತೆರಿಗೆ

        ಮೊನ್ನೆ ಟಿವಿ ಚರ್ಚೆಯಲ್ಲಿ ಯಾರೋ ಒಬ್ಬರು ಹೇಳಿದ ನೆನಪು  " ಯಾವುದೇ ಸರಕಾರ ಇದ್ದರೂ ಯು ಪಿ ಐ ಪಾವತಿ ವಿಧಾನ ಬರುತ್ತಿತ್ತು. ಬದಲಾವಣೆ ಅಭಿವೃದ್ದಿ ಜಗದ ನಿಯಮ. ಇದಕ್ಕೆ ಯಾರೂ ಕಾರಣರಲ್ಲ. ಮೋದಿ ಕಡಿದು ಗುಡ್ಡೆ ಹಾಕಿದ್ದು ಏನೂ ಇಲ್ಲ." ಆಗ ಸರಿ ಅಂತ ತೋಚಿರಬಹುದು. ಹೌದಲ್ವ...ಎಷ್ಟೋ ಬದಲಾಗಿದೆ, ಹಾಗೇ ಇದು..ಆದರೆ ಇವತ್ತು ಅದೇ ಯುಪಿಐ ಬಗ್ಗೆ...ಅದನ್ನು ಬಳಕೆ ತಂದದ್ದೇ ಮೋದಿ. ಅದರಿಂದಲೇ ಹೀಗೆಲ್ಲ ಆಯಿತು ಅಂತ.  ಇದರಲ್ಲಿ ವಿಶೇಷವೇನೂ ಇಲ್ಲ.ಯಾವುದೇ ಆದರೂ ನಮಗೆ ಅನುಕೂಲವಾದರೆ ಅದರೆ ಪ್ರಯೋಜನ ಪಡೆಯುತ್ತೇವೆ. ಸಮಸ್ಯೆ ಎದುರಾದಾಗ ಎಲ್ಲ ತಪ್ಪುಗಳನ್ನು ಅದರ ಮೇಲೆ ಹಾಕಿಬಿಡುತ್ತೇವೆ. ಯಾವುದನ್ನೇ ಆದರೂ ಉಪಯೋಗಿಸುವಾಗ ವಿವೇಚನೆ ಎಂಬುದು ಅತೀ ಮುಖ್ಯ. ನಮ್ಮ ನಿರ್ಧಾರಗಳು ನಮ್ಮ ನಡೆಗಳು ವಿವೇಚನ ರಹಿತವಾದರೆ ನಮ್ಮ ತಪ್ಪುಗಳು ಗೋಚರಿಸುವ ಬದಲು ಮತ್ತೊಬ್ಬರು ಅಪರಾಧಿಗಳಾಗಿಬಿಡುತ್ತಾರೆ. 


ಮೊದಲಿನಿಂದಲೂ ನಮಗೆ ತೆರಿಗೆ ಕಟ್ಟುವುದೆಂದರೆ ಅದು ನಷ್ಟದ ಬಾಬ್ತು. ನನ್ನ ವೃತ್ತಿಯಲ್ಲಿ ಈಗ ಬಹುಪಾಲು ಜನರು ತೆರಿಗೆ ಕಟ್ಟುವ ಅರಿವಿನಿಂದ  ಕಾಳಜಿಯಿಂದ ಬರುವುದಿಲ್ಲ. ತೆರಿಗೆ ಎಂಬ ಭೂತವನ್ನು ಹೇಗೆ ಕಟ್ಟಿಹಾಕಬಹುದು ಎಂಬ ಯೋಚನೆಯಲ್ಲೇ ಬರುತ್ತಾರೆ. ನಾವು ಓಡಾಡುವ ರಸ್ತೆ, ವಿದ್ಯುತ್ ನೀರಾವರಿ ಇವುಗಳೆಲ್ಲ ಕೇವಲ ಉಚಿತವಾಗಿ ಪ್ರಕೃತಿಯಿಂದ ಸಿಗುವುದು ಅಂತ ತಿಳಿಯುತ್ತೇವೆ. ಹೆಚ್ಚೇಕೆ...ಸರಕಾರ ಕೊಡುವ ಉಚಿತ ಯೋಜನೆಗಳು ನಾವು ಕಟ್ಟಿದ ತೆರಿಗೆಯಿಂದಲೇ ಬರುತ್ತದೆ ಎಂಬುದನ್ನೂ ಮರೆತು ಬಿಡುತ್ತೇವೆ. ಹಾಲು ಎಲ್ಲಿಂದಲೂ ಬರಲಿ ಹಸುವಿನ ಪರಿವೆ ನಮಗೇಕೆ? 

ಮಾರಾಟ ತೆರಿಗೆ ಅದೇನು ಈಗ ಹೊಸತಲ್ಲ. ಆದರೆ ಈಗ ಅದರೆ ಹರಿತ ಅನುಭವಕ್ಕೆ ಬರುತ್ತದೆ. ಯಾರೋ ಇದ್ದವರು ತೆರಿಗೆ ಕಟ್ಟುತ್ತಾರೆ ಎಂಬ ಅನಾಸಕ್ತಿ ಇದುವರೆಗೆ ಇತ್ತು. ಈಗ ಏಲ್ಲೋ ಬಂದ ಕೊರೋನ ನಮ್ಮ ಮನೆಬಾಗಿಲಿಗೆ ಬಂದಹಾಗೆ ಹೌಹಾರಿ ಬಿಡುತ್ತಾರೆ. ಕೊನೆ ಪಕ್ಷ ನಾವು ತೆರಿಗೆ ಕಟ್ಟುವ ನಮ್ಮಿಂದಲೂ ಸರಕಾರ ತೆರಿಗೆ ಕೇಳುತ್ತದೆ ಎಂಬ ಸ್ಥಿತಿಗೆ ನಾವು ಬಂದೆವಲ್ಲಾ ಎಂದು ತಿಳಿದುಕೊಳ್ಳುವ ಅದರಿಂದ ಒದಗಿದ ಘನತೆಯ ಬಗ್ಗೆ ಯೋಚಿಸುವುದಿಲ್ಲ. ನಮ್ಮ ಘನಗೆಗೆ ವಿನಾಕಾರಣ ಖರ್ಚುಮಾಡುವ ನಮಗೆ ತೆರಿಗೆ ಮಾತ್ರ ನಷ್ಟದ ಬಾಬತ್ತಾಗಿ ಕಾಣುತ್ತದೆ. 

ಮಾರಾಟ ತೆರಿಗೆ ಒಂದು ಇಪ್ಪತ್ತು ವರ್ಷದ ಹಿಂದಕ್ಕೆ ಹೋಗಿ ನೋಡಿದರೆ ಆಗಲೂ ಇತ್ತು , ಎಳು ಲಕ್ಷ ವ್ಯಾಪಾರವಹಿಟು ಮಾಡಿದರೆ ಮಾರಾಟ  ತೆರಿಗೆಯ ವ್ಯಾಪ್ತಿಯಲ್ಲಿ ಖಡ್ಡಾಯ ನೊಂದನಿ ಮಡಿಸಿ ಸರಕಾರಕ್ಕೆ ತೆರಿಗೆ ಪಾವತಿಸಬೇಕು ಈಗ ಅದೇ ಪರಿಮಿತಿ 40  ಲಕ್ಷ ತಲುಪಿದೆ. 

ನಾಣ್ಯ ರಾಶಿಹಾಕಿ ಕೈಗೆ ಸಿಕ್ಕಿದ ಹಣವನ್ನು ಬಾಚಿಕೊಳ್ಳಿ ಎಂದರೆ ನಾವು ನಮ್ಮ ಹತ್ತೂ ಬೆರಳುಗಳನ್ನು ಎಷ್ಟು ಸಾಧ್ಯವೋ ಅಷ್ಟು ನಾಣ್ಯವನ್ನು ವಶಪಡಿಸಿಕೊಳ್ಳುತ್ತೇವೆ. ಕೈಬೆರಳ ಸಂಧಿಯಿಂದಿ ನಾಣ್ಯ ಹೊರಬರದಂತೆ ಪ್ರಯತ್ನ ಮಾಡುತ್ತೇವೆ. ತೆರಿಗೆ ಸಂಗ್ರಹ ಎಂದರೆ ಹೆಚ್ಚು ಕಮ್ಮಿ ಇದೇ ವಿಧಾನವನ್ನು ಹೋಲುತ್ತದೆ. ಸರಕಾರ ತನ್ನ ಬೆರಳುಗಳನ್ನು ಅರಳಿಸಿ ಎಷ್ಟು ಅಷ್ಟು ತೆರಿಗೆ ಸಂಗ್ರಹಿಸುವುದಕ್ಕೆ ನೋಡುತ್ತದೆ. ಅದನ್ನು ತಪ್ಪು ಎನ್ನುವುದಕ್ಕೆ ಸಾಧ್ಯವೆ? ಅದು ಸಂವಿಧಾನದ ಗೌರವ ಇದ್ದವರಿಗೆ ಇಂತಹ ಮಾತುಗಳು ಬರುವುದಿಲ್ಲ. ತೆರಿಗೆ ಎಂಬುದು ಸುಮ್ಮನೇ ಬರುವುದಿಲ್ಲ. ಅದರೆ ಹಿಂದೆ ಹಲವರ ಪರಿಶ್ರಮ ಇರುತ್ತದೆ. ಅದು ಸಂವಿಧಾನಕ್ಕೆ ಅನುಗುಣವಾಗಿ ಇರುತ್ತದೆ. ಕೇಂದ್ರ ಅಥವಾ ರಾಜ್ಯ ಸರಕಾರವನ್ನು ದೂರುವಾಗ ಈ ಸಂವಿಧಾನವನ್ನು ತಿಳಿದಿರಬೇಕು. 

ಈ ವರ್ಷ ಆದಾಯ ತೆರಿಗೆ ಮಿತಿ ಹನ್ನೆರಡು ಲಕ್ಷ ಇದೆ. ಹಾಗಂತ ನಾವು ಮಿತಿ ಮೀರಿ ಆದಾಯ ತೋರಿಸಿದರೆ ಈವರೆಗೆ ನಾವು ಏನು ಮಾಡುತ್ತಿದ್ದೀರಿ ಅಂತ ಸರಕಾರ ಕೇಳುವುದಿಲ್ಲ ಎಂದು ಏನು  ಭರವಸೆ ಇದೆ. ಇಲ್ಲಿ ವಿವೇಚನೆ ಅತೀ ಮುಖ್ಯ. ತೆರಿಗೆ ಕಟ್ಟುವುದಕ್ಕೆ ಹಿಂಜರಿಯುವಾಗ ನಲ್ವತ್ತು ಲಕ್ಷ ಕೇವಲ ಸಣ್ಣ ಮೊತ್ತ ಎಂದಾಗುವುದಿಲ್ಲ. ಆಷ್ಟು ಸಂಪಾದಿಸುವವನು ತೆರೆಯ ಮರೆಗೆ ಹೇಗೆ ಸರಿದು ಹೋಗಬಲ್ಲ. ತೆರಿಗೆ ಕಟ್ಟುವುದನ್ನು ಕಟ್ಟಲೇ ಬೇಕು. ಅದನ್ನೆಂದೂ ಕಳಚಿ ಹಾಕುವುದಕ್ಕೆ ಸಾಧ್ಯವಿಲ್ಲ. ಆದರೆ ಒಂದು ಇಷ್ಟು ಕಷ್ಟ ಪಟ್ಟು ತೆರಿಗೆ ಕಟ್ಟುವಾಗ, ಅದೇ ತೆರಿಗೆ ಹಣವನ್ನು ಯಾವುದೇ ನಾಚಿಕೆ ಮರ್ಯಾದೆ ಇಲ್ಲದೆ ದುಂದು ವೆಚ್ಚ ಮಾಡುವ ಮಂತ್ರಿ ಹಾಸಕರನ್ನು ಕಾಣಬಹುದು. ಈ ತೆರಿಗೆ ಹಣ ಜನಸಾಮಾನ್ಯರನ್ನು ಹಿಂಡಿ ಬಂದ ಹಣ ಎಂಬ ಸಾಮಾನ್ಯ ಪ್ರಜ್ಞೆಯನ್ನಾದರೂ ಈ ಸರಕಾರದ ಅಂಗಗಳು ಅರಿಯಬೇಕಿದೆ.  

No comments:

Post a Comment