Monday, October 3, 2022

"ಅರ್ಘ್ಯ"

 "ಅರ್ಘ್ಯ"  ಎಂದರೇನು? ಇದರ ಶಬ್ದಾರ್ಥ ತಿಳಿದರೆ ಆಶ್ಚರ್ಯವಾಗುತ್ತದೆ. 

"ಅರ್ಘ್ಯ" ಒಂದು ಪವಿತ್ರವಾದ ಶಬ್ದ.  ಇದನ್ನು ಸ್ಮರಿಸುವಾಗ ಒಂದು ದಿವ್ಯತೆಯ ಮತ್ತು ಪ್ರಕೃತಿಯ ಸಂಬಂಧದ ಬಗ್ಗೆ ಅನುಭವವಾಗುತ್ತದೆ. ಸಾಮಾನ್ಯವಾಗಿ ಅರ್ಘ್ಯ ಎಂದರೆ, ಬೊಗಸೆಯನ್ನು ಸೇರಿಸಿ ಅದರ ತುಂಬ ನೀರನ್ನು ಮೊಗೆದು ಸೂರ್ಯನಿಗೆ ಅಭಿಮುಖವಾಗಿ ಅರ್ಪಿಸುವುದು. ಇದು ಅರ್ಘ್ಯದ ಕ್ರಿಯೆಯನ್ನಷ್ಟೇ ಹೇಳುತ್ತದೆ. 

ಅರ್ಘ್ಯ  ಎಂದರೆ ಮೌಲ್ಯಯುತವಾದದ್ದು, ಆದರು ಅದೂ  ಅಮೂಲ್ಯವಾದದ್ದು ಎಂದು ಅರ್ಥವಿಸಬೇಕು. ಪರಿಮಿತಿಯೊಳಗೆ  ಮೌಲ್ಯ ಕಟ್ಟಲಾಗದೇ ಇದ್ದದ್ದು, ಹೀಗೆ ಮೌಲ್ಯವನ್ನು ಕಲ್ಪಿಸಲು ಆಸಾಧ್ಯವಾಗಿರುವದ್ದು ಕೇವಲ  ನಮ್ಮ ಬೊಗಸೆಯೊಳಗಿದೆ.  ದಾನ ಮಾಡುವಾಗ ನಮ್ಮ ಬೊಗಸೆ ತುಂಬಿಸಿ ಕೊಡುತ್ತೇವೆ.  ಅದು ಅಮೂಲ್ಯವಾಗಿದೆ ಎಂದೇ ತಿಳಿಯಬೇಕು.  ನಮ್ಮ ಬೊಗಸೆ ಅಮೂಲ್ಯವಾದದದ್ದು.  ಪರೋಕ್ಷವಾಗಿ ಇದನ್ನು ಮೀರಿ ನಾವು ಆಡಂಬರವಾಗಿ ವಿಜ್ರಂಭಣೆಯಿಂದ ಏನು ಆಚರಿಸುತ್ತೇವೆಯೋ ಅದು ಈ ಮೌಲ್ಯವನ್ನು ಸರಿದೂಗಿಸುವುದಿಲ್ಲ. ಭಗಂತನ ಹೆಸರಲ್ಲಿ ವಿನಿಯೋಗಿಸುವ ಯಾವುದೇ ಕ್ರಿಯೆಯಾಗಲಿ ಅದು ಭಕ್ತಿ ಶ್ರಧ್ಧೆಯನ್ನು ಪ್ರತಿನಿಧಿಸುತ್ತದೆ, ಹೊರತು ಯಾವುದೂ ಆಡಂಬರವನ್ನು ಬಿಂಬಿಸುವುದಿಲ್ಲ. ಒಂದು ವೇಳೆ ಅಲ್ಲಿ ಆಡಂಬರ ತಂದರೆ ಅದು ಅರ್ಥಹೀನವಾಗುತ್ತದೆ. ಒಂದು ಬೊಗಸೆ ನೀರು ಪ್ರದಾನ ಮಾಡುವಾಗ , ನನ್ನಲ್ಲಿರುವುದೆಲ್ಲಾ ನಿನ್ನದೇ ಎಂದು ಪ್ರತಿನಿಧೀಕರಿಸುವಂತೆ ಅರ್ಘ್ಯ ದಾನ ಅತ್ಯಂತ ಶ್ರೇಷ್ಠವಾಗುತ್ತದೆ. 

ಧನಿಕನಾಗಲೀ ಬಡವನಾಗಲೀ  ಭಗವಂತನಿಗೆ ಪ್ರಣಾಮವನ್ನು ಕೇವಲ ನಮಸ್ಕರಿಸಿಯೇ ಸಲ್ಲಿಸುತ್ತಾನೆ. ನಮಸ್ಕಾರ,   ಬಡವನ ಕೈ ಒಟ್ಟು ಸೇರಿದರೂ ಅದು ನಮಸ್ಕಾರ, ಧನಿಕನ ಕೈ ಒಟ್ಟು ಸೇರಿದರೆ ಅದು ನಮಸ್ಕಾರ ಇಲ್ಲಿ ಆಡಂಬರದ ಅವಶ್ಯಕತೆಯೇ ಇರುವುದಿಲ್ಲ. 

ಬ್ರಹ್ಮ ಸಂಸ್ಕಾರದಲ್ಲಿ ಸಂಧ್ಯಾವಂದನೆ, ಇನ್ನುಳಿದ ಸಂಸ್ಕಾರದಲ್ಲಿ ನಿತ್ಯ ಕರ್ಮಗಳು,  ಇವುಗಳು ಸರಳವಾಗಿ ಆಚರಣೆಯಲ್ಲಿದ್ದರೆ ಅದು ಉದಾತ್ತವಾಗಿ ಪರಮಾತ್ಮನಲ್ಲಿ ಐಕ್ಯವಾಗುವುದಕ್ಕೆ ಅನುಕೂಲವಾಗುತ್ತದೆ.  ಸಂಧ್ಯಾವಂದನೆ, ಯಾವ ಪರಿಕರವೂ ಇಲ್ಲದೇ ಇದನ್ನು ಶುದ್ದ ಮನಸ್ಸಿನಿಂದ ಆಚರಿಸಬಹುದು. ಇದಕ್ಕೆ ಯಾವುದೇ ದ್ರವ್ಯಗಳ ಆವಶ್ಯಕತೆ ಇರುವುದಿಲ್ಲ. ಯಾವುದೇ ಆಡಂಬರ ಇರುವುದಿಲ್ಲ. ಹಾಗಿದ್ದರೂ ಯಾವುದೇ ಶ್ರೇಷ್ಟ ದೈವ ಉಪಾಸನೆಗಿಂತಲೂ ಸಂಧ್ಯಾವಂದನೆ  ಅತ್ಯಂತ ಶ್ರೇಶ್

 ಅನ್ನ ಆಹಾರ, ವೃತ್ತಿ ಹೀಗೆ ಪ್ರತಿಯೊಂದಕ್ಕೂ ಅನಿವಾರ್ಯ ಎಂಬಂತೆ ನಾವು ಸಮಯವನ್ನು ನಿಗದಿಮಾಡುವ ಮೊದಲು ನಿತ್ಯಕರ್ಮಗಳಿಗೆ ಒಂದಷ್ಟು ಸಮಯವನ್ನು ನಿಗದಿಗೊಳಿಸಬೇಕು. ದಿನದ ಆರಂಭವೇ ನಿತ್ಯಕರ್ಮದಿಂದ ಕೂಡಿ ಶುದ್ದ ಮನಸ್ಸಿನಿಂದ ಅಹಂಕಾರ ವಿಕಾರಗಳನ್ನು ದೂರವಿರಿಸಿದಾಗ ನಮ್ಮೊಳಗಿನ ಪರಮಾತ್ಮ ದರ್ಶನವಾಗುತ್ತದೆ. ಯಾವ ಗುಡಿ ಕ್ಷೇತ್ರಗಳ ಅನಿವಾರ್ಯತೆ ಇಲ್ಲ. ಯಾವ ಧನ ಸಂಪತ್ತು ಆಡಂಬರದ ಅಗತ್ಯವಿರುವುದಿಲ್ಲ. ಕೇವಲ ಭಕ್ತಿ ಮತ್ತು ಶ್ರದ್ಧೆ ಮಾತ್ರ ಇಲ್ಲಿ ಅನಿವಾರ್ಯವಾಗುತ್ತದೆ. ಇದು ಅನಿವಾರ್ಯವಾದಷ್ಟು ಪರಮಾತ್ಮ ಸಾಕ್ಷಾತ್ಕಾರವಾಗುತ್ತದೆ. 


ದ್ವೇಷ, ವೈಷಮ್ಯ ಮತ್ಸರ ಸುಖ ದುಃಖ ದುಮ್ಮಾನ ಅಳು ನಗು  ಈ ಎಲ್ಲಾ ವಿಕಾರಗಳಿಂದ ದೂರಾಗಿ ಪರಿಶುದ್ಧ ಮನಸ್ಸಿನಿಂದ ಪರಮಾತ್ಮನ ಚಿಂತನೆಯಲ್ಲಿದ್ದಾಗ ಧ್ಯಾನ  ಪರಿಪೂರ್ಣವಾಗುತ್ತದೆ. ಧ್ಯಾನವೆಂದರೆ ಅಲ್ಲಿ ನಾವೇ ಪರಮಾತ್ಮವಾಗಿ ಅದ್ವೈತ  ಭಾವದಲ್ಲಿ ತಲ್ಲೀನವಾಗುವ  ಕ್ರಿಯೆ. ಯಾವುದೆ ಯಾಗ ಯಜ್ಞ ಪೂಜೆ ಪುನಸ್ಕಾರಗಳಿಗಿಂತಲೂ ಧ್ಯಾನದಲ್ಲಿ ಪರಮಾತ್ಮ ಸಾನ್ನಿಧ್ಯ ತೀರ ಹತ್ತಿರವಾಗಿರುತ್ತದೆ. ಮತ್ತು ಇದು ಎಲ್ಲಾಅಡಂಬರದಿಂದ ದೂರವಾಗಿ  ಬಹಳ ಸರಳವಾಗಿ ದೇಹ ಮನಸ್ಸು ಮಾತ್ರ ಪ್ರಧಾನವಾಗಿರುವ ದಿವ್ಯ ಕ್ರಿಯಾಯಾಗಿರುತ್ತದೆ. ಧ್ಯಾನ ಚಿತ್ತಹೊಂದಿದ ನಂತರ ಅಲ್ಲಿ ನಂತರ ಯಾವ ಅನಿವಾರ್ಯ ಬಂಧನಗಳೂ ಉಳಿಯುವುದಿಲ್ಲ. 


No comments:

Post a Comment