Friday, January 26, 2024

ತ್ರಿಪುರ ಯೋಗ ಥೆರಪಿ

ಕೆಲವು ದಿನಗಳ ಹಿಂದೆ ಭಾರತವು ವಿಶ್ವವೇ ಬೆರಗಾಗುವಂತೆ ಮಾಡಿದ ಚಂದ್ರಯಾನ ನೆನಪಿರಬಹುದು. ಭೂಮಿಯಿಂದ ಚಂದ್ರನ ಕಕ್ಷೆಗೆ ಜಿಗಿದ ಭಾರತ ಗುರಿ,  ಇಷ್ಟರವರೆಗೆ ಕೈಗೆಟುಕದೆ ಓಡಾಡುತ್ತಿದ್ದ ಚಂದ್ರನೊಡನೆ ಸಂಬಂಧ ಬೆಳೆಸಿಕೊಂಡು ಬಿಟ್ಟಿತು. ಅದು ಬಾಹ್ಯಾಕಾಶದ ಚಂದ್ರಯಾನವಾದರೆ,  ಯೋಗ ಜೀವನದಲ್ಲಿ ಒಂದು "ಚಂದ್ರಾಯಣ"ವಿದೆ. ಇಷ್ಟರವೆರೆಗೆ ಅದು ಎಲ್ಲೋ ಓದಿದ್ದು, ಮತ್ತು ಯಾರೋ ಒಂದಷ್ಟು ಹೇಳಿದ್ದು ಬಿಟ್ಟರೆ ಅದು ನನಗೆ ಸಾಧ್ಯವಿಲ್ಲ ಎಂಬ ನಿರ್ಧಾರದಲ್ಲಿ ನಾನಿದ್ದೆ. ಆದರೆ ಅದು ಸಾಧ್ಯವಾಗುವಂತೆ ನಿರೀಕ್ಷೆಯನ್ನು ಹುಟ್ಟಿಸಿದವರು ತ್ರಿಪುರ ಯೋಗ ಥೆರಪಿಯ ಶಿಕ್ಷಣ ತಜ್ಞ ಡಾ. ಶ್ರೀ ಹೃಷಿಕೆಶ ಪೆರ್ನಡ್ಕ. 

"ಚಂದ್ರಾಯಣ" ಅದೊಂದು ಆಹಾರ ಪದ್ದತಿ. ಜತೆಗೆ ಒಂದು ಜೀವನ ಶೈಲಿಯೂ. ಮಿತವಾದ ಆಹಾರ. ಶಿಸ್ತುಬದ್ಧ ಜೀವನ ಶೈಲಿ. ಒಂದು ಹುಣ್ಣಿಮೆಯಿಂದ ಇನ್ನೊಂದು ಹುಣ್ಣಿಮೆಯ ತನಕದ ಪಯಣ. ನಡುವೆ ಒಂದು ಅಮಾವಾಸ್ಯೆ. ಇದರ ನಡುವೆ ಅದಕ್ಕೆ ಹೊಂದಿಕೊಂಡು ಆಹಾರ ಉಪವಾಸ ಪದ್ಧತಿ. ಮೊದಲು ಉಪವಾಸದ ಅವಧಿಯನ್ನು ಹೆಚ್ಚಿಸುತ್ತಾ ಸಾಗಿ ಅಮಾವಾಸ್ಯೆದಿನ ಪೂರ್ಣ ಉಪವಾಸಕ್ಕೆ ಬಂದು ಆನಂತರ ಯಥಾ ಪ್ರಕಾರ ಪೂರ್ವ ಸ್ಥಿತಿಗೆ ಬರುವ ಒಂದು ಪಯಣ. ಇದರ ನಿಯಮಗಳನ್ನು ವಿವರಿಸುವಷ್ಟು ತಿಳುವಳಿಕೆ ನನಗಿಲ್ಲ. ಆದರೆ ಅದನ್ನು ಆಚರಿಸಿ ನೋಡಬೇಕೆಂಬ ಕುತೂಹಲ ಬಹಳ ಸಮಯದಿಂದ ಇತ್ತು. ಇದೀಗ ಅದನ್ನು ಆಚರಿಸುವ ಒಂದು ಸಂಕಲ್ಪ ಹೃಷಿಕೇಶ್ ಅವರ ಒಡನಾಟದಲ್ಲಿ ದೊರಕಿತು. 

ಕಳೆದ ದಿನ ನಮ್ಮೂರಿನವರೇ ಆದ ಡಾಕ್ಟರ್ ಶ್ರೀ ಹೃಷಿಕೇಶ ಪೆರ್ನಡ್ಕ ಇವರ ತ್ರಿಪುರ ಯೋಗ ಥೆರಪಿ ಕೇಂದ್ರಕ್ಕೆ ಭೇಟಿ ಕೊಟ್ಟಿದ್ದೆ. ಹಲವು ದಿನಗಳಿಂದ ಹೋಗಬೇಕೆಂದು ಬಗೆದು ಮೊನ್ನೆ ಪ್ರಯತ್ನ ಪಟ್ಟು ಒಂದಷ್ಟು ಸಮಯ ಮಾಡಿ ಭೇಟಿಕೊಟ್ಟೆ. ಅದಕ್ಕೆ ಮುಖ್ಯಕಾರಣ ಯೋಗದ ಬಗ್ಗೆ ಇವರಲ್ಲಿ ಹಲವು ಸಲ ಚರ್ಚಿಸಿದ್ದೆ. ಸಾಕಷ್ಟು ಮಾಹಿತಿಗಳನ್ನು ಪಡೆದಿದ್ದ. ಹೃಷಿಕೇಶ ಅವರು ಮೂಲತಃ ಮಂಗಳೂರಿನ ಬಂಟ್ವಾಳದ ಕನ್ಯಾನದವರು. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಯೋಗ ವಿಷಯಗಳಲ್ಲಿ ಪಿ ಹೆಚ್ ಪದವಿ ಪಡೆದು ಡಾಕ್ಟರ್ ಆದವರು. ಕೆಲವು ಕಾಲ ಉಪನ್ಯಾಸಕರಾಗಿ ವೃತ್ತಿ ಮಾಡಿದವರು ಮೊನ್ನೆ ಮೊನ್ನೆ ಕೋರೋನ ಕಾಲ ಬರುವ ತನಕವೂ ಸಿಂಗಾಪುರದಲ್ಲಿ ಯೋಗ ತರಬೇತಿ ಚಿಕಿತ್ಸೆ  ವೃತ್ತಿ ಮಾಡುತ್ತಿದ್ದವರು ಈಗ ಬೆಂಗಳೂರಿನ ಜೆ ಪಿ ನಗರದಲ್ಲಿ ಯೋಗ ಥೆರಪಿ ಆರಂಭಿಸಿದ್ದಾರೆ. ನಾನು ಭೇಟಿಕೊಟ್ಟಾಗ ಚಾಂದ್ರಯಾನ ವೃತದ ಬಗ್ಗೆ ಆಸಕ್ತರಾಗಿದ್ದವರು ಅದರ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡಿದರು. ಸಣ್ಣ ಹರಯದಲ್ಲೇ ಯೋಗ ಥೆರಪಿಯಲ್ಲಿ ಡಾಕ್ಟರೇಟ್ ಪಡೆದ ಇವರಿಗೆ ಪ್ರಶಸ್ತಿ ಪುರಸ್ಕಾರವೂ ಸಂದಿದೆ. 





ಯಾವುದೋ ಅನಿರೀಕ್ಷಿತ ಸಂದರ್ಭದಲ್ಲಿ ನನ್ನ ಅವರ ಭೇಟಿಯಾಯಿತು. ಭೇಟಿಯಾದ ನಂತರ ಇವರು ಯೋಗದ ಬಗ್ಗೆ ಡಾಕ್ಟರೇಟ್ ಪಡೆದಿದ್ದಾರೆ ಎಂದು ತಿಳಿದನಂತರ ನನ್ನ ಅವರ ಸ್ನೇಹ ಅತ್ಮೀಯತೆ ಬೆಳೆದು ಬಂತು. ಆನಂತರ ನನ್ನ ಹಲವಾರು ಸಮಸ್ಯೆಗಳಿಗೆ ಇವರಿಂದ ಪರಿಹಾರವನ್ನು ಪಡೆದುಕೊಂಡಿದ್ದೇನೆ.  ಯೋಗಭ್ಯಾಸ ಎಂಬುದು ಆಧುನಿಕ ಜಗತ್ತಿನಲ್ಲಿ ಹೆಚ್ಚು ಆವಶ್ಯಕ ಅಂತ ಕಾಣುವಾಗ ಹಲವು ಕಡೆ ಇದರ ದುರುಪಯೋಗವೂ ಆಗುತ್ತಿದೆ. ಗಲ್ಲಿ ಗಲ್ಲಿಗಳಲ್ಲಿ ಯೋಗ ತರಗತಿಗಳು ಇದೆ. ಆದರೆ ಗುಣಮಟ್ಟ ಬಹಳ ಕಡಿಮೆಯಾಗಿದೆ. ಹೆಚ್ಚಿನ ಕಡೆ ಇದೊಂದು ಉದ್ಯೋಗದ ರೀತಿಯಲ್ಲಿ ಒಂದು ದಂಧೆಯಾಗಿ ಬೆಳೆದುಬಿಟ್ಟಿದೆ. ಸರಿಯಾಗಿ ಅಧ್ಯಯನ ಮಾಡದೇ ಕೇವಲ ಕೆಲವು ತಿಂಗಳ ತರಬೇತಿ ಪಡೆದು ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಒಂದು ಸರ್ಟಿಫಿಕೇಟ್ ಪಡೆದು ಬಿಡುತ್ತಾರೆ. ತಾವು ಎಲ್ಲವನ್ನು ಕಲಿತು ಬಿಟ್ಟಿದ್ದೇವೆ ಎಂಬ ಪರವಾನಿಗೆ ಪಡೆದಂತೆ ತರಗತಿಯನ್ನು ಆರಂಭಿಸುತ್ತಾರೆ. ಹಲವರಿಗೆ ಸರಿಯಾಗಿ ನೆಟ್ಟಗೆ ಸಮರ್ಪಕ ಪದ್ಮಾಸನ ಹಾಕುವುದಕ್ಕು ಸಾಧ್ಯವಾಗದೇ ಇರುವುದನ್ನು ಕಂಡಿದ್ದೇನೆ. ಯಾಕೆಂದರೆ ನೇರ ಕುಳಿತುಕೊಳ್ಳಬೇಕೆಂದರೆ ಬೆನ್ನು ಹುರಿ ಗಟ್ಟಿಯಾಗಬೇಕು. ಇದು ಬಹಳಷ್ಟು ಸಮಯ ತೆಗೆದುಕೊಳ್ಳುತ್ತದೆ.   ನಾವು ಸ್ವಪ್ರಯತ್ನದಿಂದ ನೇರ ಕುಳಿತುಕೊಳ್ಳುವುದಕ್ಕೂ ಸಹಜವಾಗಿ ಕುಳಿತುಕೊಳ್ಳೂವುದಕ್ಕೂ ವೆತ್ಯಾಸವಿದೆ. ಮೊದಲಿನದ್ದು ಶಿಕ್ಷೆಯ ಒತ್ತಡವಾದರೆ, ಇನ್ನೊಂದು ನಿರಾಳತೆಯ ಸಹಜ ಸ್ಥಿತಿ. ಇಂತಹ ಸೂಕ್ಷ್ಮ ವಿಷಯಗಲನ್ನು ತಿಳಿಯದೇ ಒಟ್ಟು ಯೋಗ ಶಿಕ್ಷಕರಾಗಿ ಅಧಿಕೃತ ತರಗತಿಯನ್ನು ನಡೆಸುತ್ತಾರೆ. ಪರೀಕ್ಷೆಯಲ್ಲಿ ನೂರು ಅಂಕದಲ್ಲಿ ನಲ್ವತ್ತು ಅಂಕ ಪಡೆದರೂ ತೇರ್ಗಡೆಯಾಗಿ ಶಿಕ್ಷಕರಾಗುತ್ತಾರೆ. ಆದರೆ ಅರುವತ್ತು ಅಂಕಗಳು ಇವರಿಗೆ ತಿಳಿದಿರುವುದಿಲ್ಲ. ಅದು ಹೆಚ್ಚು ಅಪಾಯಕಾರಿ. ಯೋಗಾಭ್ಯಾಸದಲ್ಲಿ ಸರಿಯಾಗಿ ಮಾಡುವುದೇ ಪ್ರಧಾನ. ತಪ್ಪುಗಳನ್ನು ಎಷ್ಟು ಕಡಿಮೆ ಮಾಡಿತೋ ಅದೇ ಲಾಭ. ತಪ್ಪುಗಳನ್ನು ಮಾಡಬಹುದು, ಆದರೆ ಮಾಡಬೇಕಾದ ಸರಿ ಒಂದಾದರೂ ಅದನ್ನು ಸರಿಯಾಗಿ ಮಾಡಬೇಕು.  ಈ ಸೂಕ್ಷ್ಮಗಳನ್ನು ಅರಿತಿರಬೇಕು. ಇಲ್ಲವಾದರೆ, ಕಲಿಸುವ ವಿದ್ಯೆ ಅಮೃತವಾಗದೇ ವಿಷವೇ ಅಧಿಕವಾಗಿಬಿಡುತ್ತದೆ. ಅದಕ್ಕೆ ನಿರಂತರ ಅಧ್ಯಯನ ಬೇಕು. ಯೋಗಾಭ್ಯಾಸದಲ್ಲಿ ಎಂಟು ಹತ್ತು ವರ್ಷ ಸಾಧನೆ ಮಾಡಿದವರಿಗೆ ಮಾತ್ರ ಶಿಕ್ಷಕನಾಗುವ ಅರ್ಹತೆ ಸಿಗಬಹುದು.    ಅದರೆ ಈ ಇನ್ಸ್ಟಂಟ್ ಯುಗದಲ್ಲಿ ಅದಕ್ಕೆಲ್ಲ ಸಮಯ ಎಲ್ಲಿದೆ? ಕಡಿಮೆ ಕೆಲಸ ಕ್ಷಿಪ್ರ ಫಲಾನುಭವ. ಇಂತಹ ಸಮಯದಲ್ಲಿ ಸ್ವತಃ ಡಾಕ್ಟರ್ ಆಗಿರುವ ಹೃಷಿಕೇಶ್ ಅವರ  ಕೆಲಸ ಗಮನಾರ್ಹವಾಗುತ್ತದೆ. ಇವರು ತಿಳಿಸಿಕೊಡುವ ಸರಳ ವಿಧಾನಗಳು, ಅದರಲ್ಲಿರುವ ಸೂಕ್ಷ್ಮ ವಿಚಾರಗಳು ಅತ್ಯಂತ ಅಮೂಲ್ಯ ಎನಿಸುತ್ತವೆ.  ಯೋಗಾಭ್ಯಾಸ ಎಂಬುದು ಕೇವಲ ವ್ಯಾಯಾಮವಾಗಿ, ಕೇವಲ ಆರೋಗ್ಯದ ದೃಷ್ಟಿಕೋನದಲ್ಲೇ ಕಾಣುತ್ತಾರೆ. ಅದರಂತೆ ಅದನ್ನು ಅನುಸರಿಸುತ್ತಾರೆ. ಇಂತಹ ಸಮಯದಲ್ಲಿ ಇದರ ಸೂಕ್ಷ್ಮ ವಿಷಯಗಳ ಬಗ್ಗೆ ಗಮನ ಹರಿಸುವುದಿಲ್ಲ. ಒಂದು ಯಂತ್ರದಂತೆ ಯೋಗಾಭ್ಯಾಸ ಮಾಡುವುದು ಬಹಳ ಅಪಾಯಕಾರಿ. 



ನಮ್ಮೂರಿನವರೇ ಆದ, ಯುವಕ ಡಾಕ್ಟರ್ ಶ್ರೀ  ಹೃಷಿಕೇಶ್ ಪೆರ್ನಡ್ಕ ಇವರು ಯೋಗ ಚಿಕಿತ್ಸೆಯಲ್ಲಿ ನಿರತರಾದವರು. ಕೋವಿಡ್ ಗಿಂತಲು ಮೊದಲು ಸಿಂಗಾಪುರದಲ್ಲಿ ವೃತ್ತಿಯಲ್ಲಿದ್ದವರು ಆನಂತರ ಭಾರತಕ್ಕೆ ಬಂದು ಈಗ ಬೆಂಗಳೂರಲ್ಲಿ ಯೋಗಕೇಂದ್ರವನ್ನು ನಡೆಸುತ್ತಿದ್ದಾರೆ.  ಯೋಗದ ಬಗ್ಗೆ ಸಾಕಷ್ಟು ತಿಳುವಳಿಕೆ ಪಡೆದವರು ಅದರಲ್ಲೇ ತಮ್ಮ ಶಿಕ್ಷಣವನ್ನು ಪಡೆದು ಈಗ ವೈದ್ಯರಾಗಿ ತ್ರಿಪುರ ಯೋಗ ಥೆರಪಿಯನ್ನು ಕೊಡುತ್ತಿದ್ದಾರೆ. ಯಕ್ಷಗಾನದ ವಿಷಯದಲ್ಲಿ ಪರಿಚಯಗೊಂಡ ಇವರ ಸಂಪರ್ಕ ಇವರು ಯೋಗ ವೈದ್ಯರಾದ ಕಾರಣ ಸ್ನೇಹ ಮತ್ತಷ್ಟು ಬಲವಾಯಿತು. ನನಗೆ ಯೋಗದ ಬಗೆಗಿನ ಸಂಶಯ ತಿಳುವಳಿಕೆಗಳ ಅವಶ್ಯಕತೆಯಾದರೆ, ದೈಹಿಕವಾಗಿ ಏನಾದರೂ ಸಮಸ್ಯೆಯಾದರೆ ಇವರಿಗೆ ಕರೆ ಮಾಡಿ ಪರಿಹಾರ ಕೇಳುತ್ತೇನೆ. ಅತ್ಯಂತ ಸರಳವಾದ ಪರಿಣಾಮಕಾರಿ ಪರಿಹಾರಗಳನ್ನು ಒದಗಿಸುವುದು ಇವರ ವಿಶೇಷತೆ.  ಯೋಗದ ವಿಚಾರ ಬಂದಾಗ ಅತ್ಯಂತ ಉತ್ಸಾಹದಲ್ಲಿ ಇವರ ಮಾತುಗಳನ್ನು ವಿಚಾರಗಳನ್ನು ಕೇಳುವುದೆಂದರೆ ನನಗೆ ಬಹಳ ಸಂತೋಷವಾಗುತ್ತದೆ. ಅದ್ಭುತವಾದ ಜ್ಞಾನ ಇವರಲ್ಲಿದೆ. ಹಲವು ಗಹನ ವಿಚಾರಗಳಿಗೆ ಖಚಿತವಾದ ಅಭಿಪ್ರಾಯಗಳನ್ನು ಮಂಡಿಸುತ್ತಾರೆ. 

ಸುಮಾರು ಎರಡು ವರ್ಷದ ಹಿಂದೆ ನನ್ನ ಅವರ ಪರಿಚಯವಾಯಿತು.  ಅವರೇ ನನ್ನ ಬಳಿಗೆ ಬಂದಿದ್ದರು. ಆನಂತರ ಅವರ ಯೋಗ ಕೇಂದ್ರಕ್ಕೆ ಭೇಟಿ ಕೊಡಬೇಕೆಂದು ಹಲವು ಸಲ ಯೋಚಿಸಿದ್ದೆ. ಸಮಯ ಸಿಕ್ಕಿರಲಿಲ್ಲ.  ಏನಾದರೂ ಸಮಸ್ಯೆಯಾದಾಗ ವಿಡೀಯೋ ಕರೆ ಮಾಡಿ ಪರಿಹಾರ ಕೇಳುತ್ತಿದ್ದೆ. ಆದರೆ ಮೊನ್ನೆ ಸಮಯ ಹೊಂದಿಸಿಕೊಂಡು ಅವರ ತ್ರಿಪುರ ಯೋಗ ಥೆರಪಿಗೆ ಪತ್ನಿ  ಸಹಿತ ಭೇಟಿಕೊಟ್ಟೆ.  ತುಂಬ ಸರಳವಾಗಿ ಸುಂದರವಾಗಿ ತಮ್ಮ ಕಾರ್ಯ ಕ್ಷೇತ್ರವನ್ನು ಸಜ್ಜುಗೊಳಿಸಿದ್ದರು. ನನ್ನ ಪತ್ನಿಯ ಆರೋಗ್ಯದ ಸಮಸ್ಯೆಗೆ ಕೆಲವೆಲ್ಲ ಸರಳ ಪರಿಹಾರವನ್ನು ಯೋಗದ ಕ್ರಮಗಳನ್ನು ತುಂಬಾ ಚೆನ್ನಾಗಿ ಹೇಳಿದರು.  ಸದಾ ಯೋಗಾಭ್ಯಾಸ ಮತ್ತು ಅದರ ಚಿಕಿತ್ಸಾಕ್ರಮಗಳ ಬಗ್ಗೆ ಚಿಂತಿಸುವ ಇವರ ಕೇಂದ್ರಕ್ಕೆ ಭೇಟಿ ಕೊಟ್ಟದ್ದು ಬಹಳ ಸಂತೋಷವನ್ನು ತಂದಿದೆ.  ಇವರ ಜ್ಞಾನದ ಉಪಯೋಗ ಅವಶ್ಯವಿದ್ದವರಿಗೆ  ಲಭಿಸಿದರೆ ಅದು ಬಹಳ ಪ್ರಯೋಜನವಾಗುತ್ತದೆ. 

ತ್ರಿಪುರ ಯೋಗ ಥೆರಪಿ ಕೇಂದ್ರ ಬೆಂಗಳೂರಿನ ಜೆ ಪಿ ನಗರದಲ್ಲಿದೆ. ಯೆಲಚೇನ ಹಳ್ಳಿ ಮೇಟ್ರೋ ನಿಲ್ದಾಣದಿಂದ ಒಂದೆರಡು ಕಿಲೋ ಮೀಟರ್ ದೂರ ಇದೆ. ಆಸಕ್ತರು ಇದರ ಉಪಯೋಗವನ್ನು ಪಡೆದುಕೊಳ್ಳಬಹುದು. ಇವರ ಮೊಬೈಲ್ ಮತ್ತು ಈ ಮೇಲ್ ವಿಳಾಸ  ಈ ಲೇಖನದ ಕೊನೆಯಲ್ಲಿದೆ. 

ಡಾಕ್ಟರ್ ಹೃಷಿಕೇಶ ಅವರ ಮೊಬಲಿ : 91138 93928 ವಿಳಾಸ : No. 894, 3rd Floor, 10th A East Cross Rd, RBI Layout, 7th Phase, J. P. Nagar, Bengaluru, Karnataka 560078. ಇನ್ನಿತರ ವಿವರಗಳ ಲಿಂಕ್   https://g.co/kgs/Uq5wRF 


No comments:

Post a Comment