Friday, April 17, 2009

ನನ್ನ ವಿದ್ಯಾರ್ಜನೆಯ ಒಂದು ಸೋಪಾನ














ನನ್ನ ಬದುಕಿನ ಮಹತ್ವದ ಹಲವು ವರ್ಷಗಳನ್ನು ಈ ಸರಕಾರಿ ಪ್ರೌಢ ಶಾಲೆಯಲ್ಲಿ ಕಳೆದಿದ್ದೇನೆ. ಅ ಸುಂದರ ಬಾಲ್ಯದ ಸವಿನೆನಪುಗಳ ಮಜಲುಗಳು ಸ್ಮರಣೆಯಲ್ಲಿ ಮೈಮನ ಪುಳಕಗೊಳ್ಳುವುದು. ಪ್ರತಿಯೋರ್ವನಿಗೂ ತಾನು ವಿದ್ಯಾರ್ಜನೆ ಮಾಡಿದ ಶಾಲೆ ಸ್ವಯಂ ಅಭಿಮಾನ ಉಳ್ಳದ್ದೆ ಆಗಿರುತ್ತದೆ. ಯಾವುದೇ ವಿದ್ಯಾರ್ಥಿಗೂ ಇದು ಮಹತ್ವದ ಹಂತ. ಹಾಗಾಗಿ ಈ ಪ್ರೀತಿ ಅಭಿಮಾನ ಎಂಬುದು ವ್ಯಕ್ತಿಗತವಾದ ಸಾಧನೆಯ ಮಾನದಂಡಕ್ಕೆ ಅನುಗುಣವಾಗಿಲ್ಲ.ಅಂದರೆ ಎಷ್ಟೋ ಜನ ಅಲ್ಲಿ ಕಲಿತಿರಬಹುದು. ಮತ್ತು ಕಲಿತಂಥ ವಿದ್ಯೆ ಕೆಲವರಿಗೆ ಎಷ್ಟು ಏನು ಎಂಬುದು ಮುಖ್ಯವಾಗಿರುವುದಿಲ್ಲ. ಬುದ್ದಿವಂತ ವಿದ್ಯಾರ್ಥಿ, ಉತ್ತಮವಾಗಿ ತೆರ್ಗದೆಯದ ವಿದ್ಯಾರ್ಥಿ, ಅಥವಾ ಅಲ್ಲಿಯ ವಿದ್ಯಾರ್ಜನೆಯಲ್ಲಿ ಯಶಸ್ಸು ಅಪಯಶಸ್ಸು ಕಂಡಿರಲಿ, ಈ ಅಭಿಮಾನ ಎಂಬುದು ಇದ್ದೆ ಇರುತ್ತದೆ. ಯಾಕೆಂದರೆ ಅಲ್ಲಿ ಕಳೆದ ದಿನಗಳು ಹಾಗಿರುತ್ತದೆ. ನನ್ನ ಮಟ್ಟಿಗೆ ಮಾತ್ರ ನಾನು ಕಲಿತದ್ದು ಎಷ್ಟು ಎಂಬುದರ ಬಗ್ಗೆ ಯೋಚಿಸುವುದಿಲ್ಲ. ಇನ್ನೊ ಹಸಿ ಹಸಿಯಾಗಿ ನೆನಪಿದೆ.

ಮಂಗಳೂರಿನ ಶಾಲೆಯಿಂದ ಪ್ರಾಥಮಿಕ ಹಂತ ಮುಗಿಸಿ ಕಾರಣಾಂತರದಿಂದ ಈ ಶಾಲೆಗೆ ಬಂದು ಸೇರಿದ್ದು. ಆವಾಗ ಶ್ರೀ ಅಚ್ಚುತ ಶೆಣೈ ಮುಖ್ಯ ಅಧ್ಯಾಪಕರಾಗಿದ್ದರು. ಕರ್ನಾಟಕದಿಂದ ಬಂದು ಇಲ್ಲಿ ಸೇರುವ ವಿದ್ಯಾರ್ಥಿಗಳಿಗೆ ಒಂದು ಪ್ರವೇಶ ಪರೀಕ್ಷೆ ಬರೆಯುವ ಅವಶ್ಯಕತೆ ಇತ್ತು. ಹಾಗಾಗಿ ಆರನೇ ತರಗತಿಗೆ ಸೇರಬೇಕಾದರೆ ನಾನು ಕೂಡ ಪರೀಕ್ಷೆ ಬರೆಯುವ ಹಾಗಾಯಿತು. ಆವಾಗ ಕೆಲವು ವರ್ಷಗಳ ಶಾಲಾ ಜೀವನದಿಂದ ದೂರವಿದ್ದವನು ನಾನು. ಇದಕ್ಕೆ ಹಲವು ಕಾರಣಗಳಿದ್ದುವು.ಆರನೇ ತರಗತಿ ಅರ್ಧದಲ್ಲೇ ನಿಲ್ಲಿಸಿ ಕೆಲವು ಸಮಯ ಕಳೆದು ನಂತರ ಇಲ್ಲಿ ಶಾಲೆಗೆ ಸೇರಿದವನು.ಹಾಗಾಗಿ ಪರೀಕ್ಷೆ ಬರೆಯಬೇಕಾದರೆ ತುಂಬ ಕಷ್ಟ ಪಟ್ಟೆ. ಹೇಗೂ ಕಷ್ಟದಲ್ಲಿ ಪಾಸು ಅದೇ ಅಂತ ಹೇಳುವುದಕ್ಕಿಂತ ನನ್ನನ್ನು ಪಾಸು ಮಾಡಿದರು ಅಂಥ ಹೇಳಿದರೆನೆ ಸೂಕ್ತ. ಹಾಗಿತ್ತು ನನ್ನ ಸ್ಥಿತಿ. ಅವಾಗ ಅಚ್ಚ್ಯುತ ಶೆಣೈ ಒಂದು ಮಾತು ಹೇಳಿದರು " ಒಳ್ಳೆ ಕಲೀಬೇಕು. SSLC ಯಲ್ಲಿ first class ತೆಗಿಬೇಕು." ಮುಂತಾಗಿ ಹುರಿದುಂಬಿಸಿ ಸೇರಿಸಿಕೊಂಡಿದ್ದರು. ತೀರ ದಡ್ಡನಾಗಿದ್ದವನು ನಾನು,SSLC ಯಲ್ಲಿ first class ಮಾತ್ರವಲ್ಲ ಎಲ್ಲದರಲ್ಲೂ 75% ಅಂಕಗಳೊಂದಿಗೆ ತೇರ್ಗಡೆಯಾಗಬೇಕಾದರೆ ಅದಕ್ಕೆ ಕಾರಣ ನಾನಲ್ಲ ಎಂಬ ಪ್ರಜ್ಞೆ ಈಗಲೂ ಇದೆ. ಅಂದಿನ ಶಿಕ್ಷಕ ಶಿಕ್ಷಕಿಯರು.. ಆ ವಾತವರಣ ಉಲ್ಲಸಿತವಾಗಿತ್ತು. ಎಲ್ಲ ಶಿಕ್ಷಕ ವ್ರಿಂದವೂ ನನ್ನಲ್ಲಿ ಸ್ನೇಹ ಸಲುಗೆಯಿಂದಲೇ ಇದ್ದವರು. ಎಲ್ಲರೂ ಆತ್ಮೀಯವಾಗಿ ವ್ಯವರಿಸಿದ್ದು ಆವಾಗಿನ ದಿನಗಳು ಬಹುಶ: ಈಗಿನ ವಿದ್ಯಾರ್ಥಿಗಳಿಗೆ ಸಿಗಲಾರದೇನೋ ಅಂದುಕೊಂಡಿದ್ದೇನೆ.


ಇಂತಹ ಶಾಲೆ ಈಗ ಸ್ವರ್ಣ ಮಹೋತ್ಸವದ ಸಂಭ್ರಮವನ್ನು ಆಚರಿಸುತ್ತಿದೆ. ನಾನು ವಿದ್ಯಾರ್ಥಿಯಾಗಿದ್ದಾಗ ರಜತ ಮಹೋತ್ಸವವನ್ನು ಆಚರಿಸಿತ್ತು.. ಅದಂತೂ ಸಂಭ್ರದ ಮೇರು ಕ್ಷಣಗಳು. ರಜತ ಸ್ವರ್ಣ ಎರಡನ್ನೂ ಸವಿಯುವ ಸುಯೋಗ ನಮ್ಮದಾಗಲಿದೆ.

No comments:

Post a Comment