Friday, April 17, 2009

ನಾನೆಂಬ ವ್ಯಕ್ತಿ


ವ್ಯಕ್ತಿಯೊಬ್ಬನು ಸಮಾಜಕ್ಕೆ ಹೊರೆಯಾದರೆ ಹೇಗೆ? ತನ್ನ ಪರಿಸರ ತನ್ನವರು ತನ್ನಂತೆ ಇರುವವರು ಹೀಗೆ ವಿಭಿನ್ನರೊಳಗೆ ಜೀವಿಸುವಾಗ ಹೊಂದಾಣಿಕೆ ಮಾಡಿಕೊಂಡರೆ ಹೊರೆಯಾಗಲಾರ. ಪರರಿಗೆ ಉಪಕಾರ ಮಾಡಲು ಸಾಮರ್ಥ್ಯವೋ ಮನಸ್ಸೋ ಸ್ವಭಾವವೋ ಇರದು . ಆದರೆ ತೊಂದರೆ ಕೊಡದೆ ಬದುಕಬಹುದಲ್ಲವೇ. ಆತ್ಮ ಮನ್ನಸ್ಸು ಗ್ರಹಿಕೆ ಪ್ರತಿಯೊಬ್ಬನಲ್ಲೂ ಇರುತ್ತದೆ. ತಾನು ನಿರಾಳವಾಗಿ ಬದುಕಬೇಕೆಂದೇ ಎಲ್ಲರ ಬಯಕೆ. ಆದರೆ ಅದು ಸಾಧ್ಯವಾಗುವುದು ತುಂಬ ಕಷ್ಟ. ಪರಹಿತ ವಲ್ಲದಿದ್ದರೂ ಪರ ಅಹಿತವಾಗದೆ ಇದ್ದರೆ ಅ ಮಟ್ಟಿಗೆ ನಿರಾಳವಾಗಿರಬಹುದಲ್ಲವೇ?

ಒಂದು ರಸ್ತೆಯಲ್ಲಿ ಗಮಿಸುವಾಗ ಹಲವರು ನಮ್ಮಂತೆ ಗಮಿಸುವವರು ಇರುತ್ತಾರೆ . ಒಂದು ಹೆಜ್ಜೆ ಒಂದು ಜಾಗದಲ್ಲಿ ಇರಿಸಿದಾಗ ಯೋಚಿಸಿ ಒಂದು ಕ್ಷಣಕ್ಕೆ ಅ ಜಾಗದ ಒಡೆಯ ನೀವು.. ಮರುಕ್ಷಣ ನಿಮ್ಮ ಹಿಂದೆ ಬರುವಾತ ಯಾರೋ ಒಬ್ಬ ಅಪರಿಚಿತ ಅದನ್ನು ಆಕ್ರಮಿಸಿ ಅವನದ್ದಾದ ಒಂದು ಕ್ಷಣ ಅವನಿಗೆ ಸಿಗಬಹುದು. ಹೀಗೆ ಯೋಚಿಸಿದರೆ ಈ ಭೂಮಿ ಮೇಲಿನ ಜೀವನ ಕೂಡ ಅದೇ ಅಲ್ಲವೇ.? ಆಕ್ರಮಣ ಪಲಾಯನ..ನಿಜಕ್ಕೂ ನಗು ಬರುತ್ತಿಲ್ಲವೇ. ಇಂದು ನೀವು ಉಳಕೊಂಡ ನಡೆದಾಡಿದ ಸ್ಥಳ.. ಮುಂದೊಂದು ಸಮಯ ಯಾರದ್ದೋ ಆಗಿರುತ್ತದೆ. ಅದುಯಾರೋ ಆಗಿರಬಹುದು. ಬಸ್ಸಿನಲ್ಲಿ ಪ್ರಯಾಣಿಸುವ ಸಮಯ ಬಂದಾಗ. ಬಸ್ಸಿಗೆ ಕಾದು ಸುಸ್ತಾದಾಗ ಒಂದು ಬಸ್ಸು ಬಂದರೆ ಸಾಕು ಬಸ್ಸು ಬಂದಮೇಲೆ ಹತ್ತಿದರೆ ಸಾಕು ನಂತರ ನಿಲ್ಲಿಕ್ಕೆ ಜಾಗ ಸಿಕ್ಕಿದರೆ ಸಾಕು ಅನಂತರ ಒಂದು ಆಸನ ಅದು ಅರ್ಧವಾದರೂ ಪರವಾಗಿಲ್ಲ ಸಿಕ್ಕಿದ್ರೆ ಸಾಕು ಆಮೇಲೆ... ಸಿಕ್ಕಿದ ಆಸನದಲ್ಲಿ ಕಿಟಿಕಿ ಭಾಗ ಸಿಕ್ಕಿದರೆ ಸಾಕು ಮರುಕ್ಷಣ ಅ ಜಾಗದಲ್ಲಿ ನಾವು ಇರೋದಿಲ್ಲ ಹೀಗಿದ್ದರೂ ಏನು ವ್ಯಾಮೋಹ.? ಇನ್ನೊಬ್ಬನನ್ನು ತಳ್ಳಿ ಬಿಟ್ಟು ಸ್ಥಳವನ್ನು ಆಕ್ರಮಿಸುವ ನಮ್ಮ ಮನಸ್ಸು ಒಂದು ಸಲ ನೋಡಿ.. ಹೇಗಿದೆ? ಇದೆಲ್ಲ ಸಹಜ ಅನಿವಾರ್ಯತೆಗಳು ಅದರೂ ಯೋಚಿಸುವಾಗ ತುಂಬ ಕ್ಷುಲ್ಲಕವಾಗಿ ಕಾಣುತ್ತದೆ.

ಸಾರ್ವಜನಿಕವಾಗಿ ಉಪಯೋಗಿಸುವ ವಸ್ತುಗಳು ಉಧಾಹರಣೆ ರಸ್ತೆಯಲ್ಲಿ ನನೋಬ್ಬ್ಬ ಹೋದರೆ ಸಾಕು .. ಸಕಲೇಶ್ ಪುರ ಘಾಟ್ ರಸ್ತೆಯಲ್ಲಿ ಒಂದು ಸಲ ಕಾರಿನಲ್ಲಿ ಹೋದಾಗ ಘಾಟ್ ಬ್ಲಾಕ್.. ಯಾವುದೊ ಕಾರಣಕ್ಕೆ.. ನಾವು ಏನು ಗ್ರಹಿಸಬಹುದು ಹೇಳಿ.. ನಮ್ಮ ಒಂದು ಕಾರು ಹೋಗುವಸ್ತು ಜಾಗ ಸಿಕ್ಕಿದ್ದರೆ ..ಹೀಗೆ.. ಪ್ರತಿ ಘಟನೆಯಲ್ಲಿ ಯೋಚಿಸುವ ಶಕ್ತಿ ಬೇಕು. ಹಿಂದೆ ಇರುವವನು ಇದ್ದೆ ರಸ್ತೆಯಲ್ಲಿ ಬರಬೇಕು.. ಅವನು ತೀರ ಅಗತ್ಯಗಳನ್ನು ಹೊಂದಿರುತ್ತಾನೆ. ..

ಹೀಗೆ ಪರರಿಗೆ ಉಪಕಾರ ಮಾಡದಿದ್ದರೂ ಪರವಾಗಿಲ್ಲ ತೊಂದರೆ ಯಂತೂ ಮಾಡದೇ ಬದುಕಬಹುದಲ್ಲವೇ. ಪರರಿಗೆ ಚಿಂತೆ ಕೊಡದವನು ನಿಶ್ಚಿಂತ. ಏನೆ ಅದರೂ ಸ್ವ ಲಾಭ ಮಾತ್ರ ಚಿಂತಿಸುವವನು ಇದು ಎಷ್ಟು ಸಮಯ ಸಾಗಬಹುದು ಎಂಬ ಚಿಂತೆಯಲ್ಲೇ ಮುಳುಗಿರುತ್ತಾನೆ.

No comments:

Post a Comment