Friday, April 17, 2009

ವೀರ ಯೋಧ


ಆಸರೆಯ ಬೇಡಿ ವೀರ ಯೋಧನಲ್ಲಿ
ಕೈಸೆರೆ ನೀಗೆಂದ ಪಶುವಿನಲ್ಲಿ
ನಾನಿಹೆನು ಕಂಕಣಬದ್ದನಾಗಿ
ದೀಕ್ಷೆಯಿದು ಎನ್ನ ಪ್ರಾಣವು ನಿನ್ನ ರಕ್ಷೆಗಾಗಿ
ಅಭಯ ನೀಡಿಹನು ಈ ಜೀವ ಮುಡಿಪಿನ್ನು
ವೀರ ಕುವರನ ವಚನವ ನೋಡು ನೀನು
ಕಣ್ಣಲ್ಲಿ ಕಣ್ಣಾಗಿ ಮಣ್ಣಲ್ಲಿ ಮಣ್ಣಾಗಿ
ಸಾರ್ಥಕವು ಈ ಬದುಕು ನಿನ್ನ ಸೇವೆಯಲ್ಲಿ..
ಮನದೊಡಲ ಭಾವನೆಗೆ ಪಶುವು ವಶವಾಗಿ
ತನ್ನೊಡಲ ಕಂಬನಿಯ ನೀಡಿ ಹರಸಿತು
ಮತ್ತೊಮ್ಮೆ ಜನಿಸಯ್ಯ ವೀರ ಕುವರ
ಧನ್ಯವಾಗಲಿ ಬದುಕು ನಿನ್ನ ರಕ್ಷೆಯಲ್ಲಿ

No comments:

Post a Comment