Friday, April 17, 2009

ನಮ್ಮ ಸಂಸ್ಕೃತಿಯ ರಾಯಭಾರಿಗಳು...





ಇತ್ತೀಚಿಗೆ ಓರ್ವರ ಮನೆಗೆ ಹೋಗಿದ್ದೆ... ಅವರು ಒಂದು ಮಟ್ಟಿಗೆ ಆತ್ಮೀಯರು ಆಗಿದ್ದರು. ಮಾತುಗರ ನಾನು ಹೀಗಾಗಿ ಕೆಲವೊಂದು ಸಲ ಸಹಜವಾಗಿ ಇಂಥವರು ನನಗೆ ಗಂಟು ಬೀಳುವುದುಂಟು. ನಾನು ಯಾಕೆ ಹೀಗೆ ಹೇಳಿದೆನೆಂದು ಮುಂದೆ ನಿಮಗೆ ಒಂದು ಮಟ್ಟಿಗೆ ಊಹಿಸಲೂ ಬಹುದು. ತೀರ ಅತ್ಮಿಯರಲ್ಲದಿದ್ದರೂ ನಮ್ಮಲ್ಲಿ ಸಲುಗೆಗೆ ಕೊರತೆಯಿಲ್ಲ. ಮತ್ತೆ ನನ್ನ ಸ್ವಭಾವವೂ ಅವರಿಗೆ ಇಷ್ಟವೋ ಏನೋ , ಮನೆಗೆ ನಾನು ಹೋದಾಗ ಸರಿ ಸುಮಾರು ರಾತ್ರಿ ೯ ಆಗಿರಬೇಕು. ಮೊದಲೇ ರಸಿಕ ಸ್ವಭಾವದವರು.. ಸಲುಗೆಯಿಂದಲೇ ನನಗೆ ಒಳಗೆ ಕರೆದು ಸೋಫಾ ತೋರಿಸಿದರು. ಯಾವುದೊ ಟಿವಿ ಕಾರ್ಯಕ್ರಮ ನೋಡುತ್ತಿದ್ದರು...

ವಾಚಾಳಿಯಾದ ನನಿಗೂ ಅವರಿಗೂ ಮಾತು ಶುರುವಾಯಿತು.. ಅಗೋಳ ಪರ್ಯಂತ ವಿಚಾರಗಳಿಗೆ ಕೊರತೆ ಎಂಬುದು ಇದೆಯೇ.? ಅದೂ ರಸಿಕರಾಗಿದ್ದಲ್ಲಿ. ಆ ವಿಚಾರ ಇರಲಿ ಜನಪ್ರಿಯ ವಾಹಿನಿಯೊಂದರ ಜನಪ್ರಿಯ ಕಾರ್ಯಕ್ರಮ ನೋಡುತ್ತಿದ್ದ ಇವನ ಟಿವಿ ನೋಡುವ ಪ್ರವೃತ್ತಿ ಯಾಕೋ ವಿಚಿತ್ರ ಅನಿಸಿತು..!!! ಅದು ಕನ್ನಡದ ಜನಪ್ರಿಯ ವಾಹಿನಿ ಸಂಗೀತಕ್ಕಾಗಿ ಹುಟ್ಟಿಕೊಂಡ ಚಾನಲ್ ಅದರ ಹಾಡಿನ ಕಾರ್ಯಕ್ರಮ ಬರ್ತಾ ಇತ್ತು.. ಯಾವುದೊ ಚಿತ್ರ ಗೀತೆ.. ( ಇವರಿಗೆ ಸಂಗೀತ ಕಲೆ ಭಾಷಾಭಿಮಾನ ಇರುವುದು ಚಲನ ಚಿತ್ರದಲ್ಲಿ ಮಾತ್ರ.!!!! ಹಾಗಾಗಿ ಸಂಗೀತ ಸೇವೆ ಎಂದು ಚಿತ್ರ ಗೀತೆ ಪ್ರಸಾರ ಮಾಡ್ತಾರೆ.!!) ಬರ್ತಾ ಇತ್ತು.. ಈ ಪುಣ್ಯಾತ್ಮ ಚಿತ್ರ ಗೀತೆ ಹಾಕಿ ! ಗೀತೆ ಶುರುವಾದ ತತ್ಕ್ಷಣ ಬದಲಾಯಿಸುತ್ತಿದ್ದ.. ಉದ್ಘೋಷಕಿ ಬಂದು ಪ್ರೆಕ್ಷಕರಲ್ಲ್ಲಫೋನ್ ಮೂಲಕ ಅದೂ ಇದೂ ಹರಟುತ್ತ ಇದ್ದ ಹಾಗೆ ಪುನ ಅದೇ ಚಾನಲ್ ಇಡುತ್ತಿದ್ದ..!!! ಮಾಮೂಲಿನಂತೆ ಜಾಹಿರಾತು ಹಾಡು ಬರುತ್ತಿದ್ದ ಹಾಗೆ ಚಾನಲ್ ಬದಲಾವಣೆ..ನನಗೆ ಸೋಜಿಗವಾಯಿತು ಕೆ .. ಯಾಕೆ ಹೀಗೆ. ನಿಜಕ್ಕೂ ಆಶ್ಚರ್ಯ.. ಯಾಕಪ್ಪ ಹೀಗೆ..? ಹೆಚ್ಚಾಗಿ ಸಿನಿಮ ಹಾಡು ನೋಡುವುದಕ್ಕಾಗಿಯೇ ಕುಳಿತು ಇನ್ನಿತರ ದೃಶ್ಯಗಳು ಬಂದಾಗ ಚಾನಲ್ ಬದಲಾಯಿಸುವುದನ್ನು ನೋಡಿದ್ದೇನೆ .. ಇದು ವಿಚಿತ್ರ ಕಂಡಿತುಕೇಳಿಬಿಟ್ಟೆ .. ಯಾಕೆ ಹೀಗೆ.
ಅವನೆಂದ ಉತ್ತರ ಕೇಳಿ ತುಸು ಯೋಚಿಸುವಂತಾಯಿತು. ಹೇಳಿದ ವಿಚಾರ ಇಷ್ಟೇ. ಅ ಕಾರ್ಯಕ್ರಮದ ನಿರೂಪಕಿ, ವೀಕ್ಷಕರೊಂದಿಗೆ ದೂರವಾಣಿಯಲ್ಲಿ ಹರಟುವ ಆಕೆ. ಬಿಗಿಯಾದ ಟೀ ಶರ್ಟು ಹಾಕಿ ತನ್ನ ಸಂಪತ್ತೆಲ್ಲವನ್ನೂ ಧಾರೆ ಎರೆದು.. ದೂರ ವಾಣಿಯಲ್ಲಿ ಹರಟುವುದನ್ನು ಪುಣ್ಯಾತ್ಮ ಬಿಟ್ಟ ಕಣ್ಣಿಂದ ನೋಡುತಿದ್ದ.. !!!! ಮತ್ತೂ ಹೇಳಿದ ಈ ಚಾನಲ್ ಗಳ ಇಂಥ ಕಾರ್ಯಕ್ರಮದಲ್ಲಿ ಇದನ್ನು ನೋಡುವುದೇ ಒಂದು ಖುಷಿ.. ಹೇಗಿದೆ? ಅವನು ಹೇಳಿದ್ದು ತುಸು ನನಗೂ ನಿಜ ಅನ್ನಿಸಿತು ನೋಡಿ ಆತ ನೋಡುತ್ತಿದ್ದ
ಅವಳ ಮೈ ಬಿಗಿಯಾದ ಉಡುಗೆ ನೋಡಿ ಎಷ್ಟು ಜನ ಪ್ರೇಕ್ಷಕರು ರಸಿಕರಾಗಬಹುದು? ಇದು ನಮ್ಮ ನಮ್ಮ ಸಂಸ್ಕೃತಿ. ಅರ್ಧ ಗಂಟೆ ಅವಧಿಯಲ್ಲಿ ಆ ಕಾರ್ಯಕ್ರಮ ಮುಗಿಯಿತು... ಪುನಃ ಇನ್ನೊಂದು ಅದೇ ಬಗೆಯ ಇನ್ನೊಂದು ಕಾರ್ಯಕ್ರಮ ಈಗ ನಿರೂಪಕಿ ಬೇರೆ.. ನಿರೂಪಕಿಯನ್ನು ಮಾತ್ರ ನೋಡುವಂತ ಕಾರ್ಯಕ್ರಮ ... ಹಾಗಿತ್ತು ಅವಳ ಉಡುಗೆ.. ಅಲ್ಲ ಡ್ರೆಸ್..






ಇವು ಎರಡೂ ಕಾರ್ಯಕ್ರಮಗಳು ಒಂದರ ಹಿಂದೆ ಒಂದು ಪ್ರಸಾರವದವುಗಳು.ನೋಡಿದಾಗ ನಮ್ಮ ಸಂಸ್ಕೃತಿಯಸಂಸ್ಕೃತಿಯನ್ನು ಬಿಂಬಿಸುವಂತಹ ಕಾರ್ಯಕ್ರಮಗಳೇ ಅಲ್ಲವೇ ನಮ್ಮ ಸಂಸ್ಕೃತಿಯ ರಾಯಭಾರಿಗಳು ಮಾಡುವುದು? ಹಾಗಿದ್ದರೆ ಇದೆ ನಮ್ಮ ಸಂಸ್ಕೃತಿಯೆಂದು ನಾವು ತೃಪ್ತಿಪಡಬೇಕು.
ರಾಯಭಾರಿಗಳಾದ ಇವರುಗಳ ಬೌದ್ದಿಕ ದಿವಾಳಿತನಕ್ಕೆ ಏನು ಹೇಳಲಿ... ಚಲನ ಚಿತ್ರ ಗೀತೆಯ ಮೂಲಕ ಸಂಗೀತ ಕಲಾಸೇವೆಯನ್ನು ಮಾಡುವ ಮಹಾನ್ ಕಲಾ ಪೋಷಕರ ಕಲಾಸೇವೆ ಈ ಮಟ್ಟಕ್ಕೆ ಇಳಿಯಿತೇ.. ಇದರಲ್ಲಿ ದುಡ್ಡಿನ ವಾಸನೆ ಅಲ್ಲದೆ ಬೇರೆ ಏನಾದರೂ ಕಾಣಬಹುದೇ?ಇಂತಿಂತಹ ಹೊತ್ತಿನಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳಿಗೆ ಹೀಗೆ ಉಡುಗೆ ತೊಡುಗೆ ಗಳಿರಬೇಕು ಎಂಬ ಅನಧಿಕೃತ ನಿಯಮವನ್ನು ಅಳವಡಿಸಿಕೊಂಡ ಹಾಗೆ ಈ ಕಾರ್ಯಕ್ರಮಗಳಿರುತ್ತವೆ. ಇಂತಹ ಆಕರ್ಷಣೆ ಆ ಕಾರ್ಯಕ್ರಮಗಳಿಗಿರಬೇಕು, ಅದನ್ನು ಪ್ರಪಂಚದ ೮ ನೇ ಅದ್ಭುತ ನೋಡುತ್ತೆವೋ ಎಂಬ ಭಾವದಲ್ಲಿ ನೋಡುವ ಪ್ರೇಕ್ಷಕರು.ಇನ್ನು ಈ ನಿರೂಪಕಿಯರ ಭಾಷಾಪ್ರೇಮವೋ, ಅತ್ಯದ್ಭುತ. ಕನ್ನಡದ ನಿತ್ಯ ಶ್ರಾದ್ದ ಮಾಡುವ ಇದಕ್ಕೆ ಅಂತ್ಯ ಇಲ್ಲವೇ.. ಮಾತುಕತೆ ಶುರು ಆಗೋದೇ.. " ನೀವು ಯಾವ ಫಿಲ್ಮ್ ನೋಡ್ತೀರ? ಮನೆಯಲ್ಲಿ ಯಾವ

Language use ಮಾಡ್ತಿರ.. ಮಮ್ಮಿ ಏನ್ ಮಾಡ್ತಾರೆ ಡಾಡಿ ಎಲ್ಲಿ ವರ್ಕ್ ಮಾಡ್ತಾರೆ.? " ಅಪ್ಪಿತಪ್ಪಿ ಕೆಲವೊಮ್ಮೆ ತಮ್ಮ ಭಾಷಾಜ್ಞಾನ ಪ್ರದರ್ಶನ ಮಾಡುವ ಇವರು ಕನ್ನಡ ಪ್ರೇಮಕ್ಕಾಗಿ ಅದ್ಬುತ ಪದ ಪ್ರಯೋಗ ಮಾಡುತ್ತಾರೆ.. ಅವಾಗ ಪ್ರಾಣಾಕ್ಷರಗಳ ಪ್ರಾಣವೇ ಹೋಗಿರುತ್ತದೆ.. ಇದು ಹೆಚ್ಚಿನ ಎಲ್ಲ ಕನ್ನಡ ವಾಹಿನಿಗಳಲ್ಲಿ ಕಂಡುಬರುವ ಸಣ್ಣದಾಗಿ ಕಾಣುವ ದೊಡ್ಡ ಸಮಸ್ಯೆ.ಮನರಂಜನೆ ಹೆಸರಲ್ಲಿ ಮಾಡುವುದೇನನ್ನು? ನಮ್ಮ ಸಂಸ್ಕೃತಿಯ ಬಗ್ಗೆ ತೀರ ಕೀಳಾಗಿ ವ್ಯವಹರಿಸುವ ಇವರಿಗೆ ಭಾಷಾ ಪ್ರೇಮವಾಗಲಿ.. ಅದು ಏನೆಂದು ತಿಳಿದಿದಿಯೇ?

ಶ್ರೀ ಬಿ ವಿ ಕಾರಂತರು ಯಕ್ಷಗಾನ ಸರಣಿಯನ್ನು ಟಿವಿ ಮಾದ್ಯಮದಲ್ಲಿ ತಂದರು. ರಾಜ್ಯ ನೆಲದ ಸಂಸ್ಕೃತಿಯನ್ನು ಬಿಂಬಿಸುವ ಕನ್ನಡ ಭಾಷಾಶುದ್ದಿಯಾಗಲಿ, ಪುರಾಣಿಕ ಪ್ರಜ್ಞೆಯಾಗಲಿ, ನಮ್ಮ ಸಂಸ್ಕೃತಿಯ ಜೀವಾಳ ಏನು ಅದನ್ನು ನಿರೂಪಿಸುವ ಇ ಯಕ್ಷಗಾನ ಸರಣಿ ಪೂರ್ಣವಾಗಿ ಪ್ರಸಾರವಾಗಲಿಲ್ಲ.. ಕಾರಂತರು ಕಂಬನಿ ತುಂಬಿ ತೀವ್ರ ವಿಷಾದದಿಂದ ಇದನ್ನು ನಿಲ್ಲಿಸಿದ ಕಾರಣವೇನು? ಜಾಹಿರಾತು ಪ್ರಾಯೋಜಕರ ಕೊರತೆ.. ಆದರೆ ಇಂಥ ಒಂದು ಸಂಸ್ಕೃತಿಯ ಅವಹೇಳನಕ್ಕೆ ಇವರಿಗೆ ಪ್ರಾಯೋಜಕರ ಕೊರತೆ ಇಲ್ಲವಾಗಿದ್ದು ಕಾಲದ ಮಹಿಮೆ ಅಲ್ಲದೆ ಮತ್ತೇನು? ಇಲ್ಲವಾದರೆ ಕಾರ್ಯಕ್ರಮ ನಿರೂಪಕಿಯರ ಈ ಬಗೆಯ ಪ್ರದರ್ಶನಕ್ಕೆ ಕಾರಣವಾದರೂ ಏನು? ತಡ ರಾತ್ರಿ ವರೆಗೂ ಪ್ರಸಾರವಾಗುವ ಇಂಥ ಕಾರ್ಯಕ್ರಮಗಳಿಗೆ ಹೀಗೆ ಇರಬೇಕೆ? ಸತ್ವ ಹೀನ ಕಾರ್ಯಕ್ರಮವನ್ನು ಜನಪ್ರಿಯಗೊಳಿಸಿ ಇಂಥ ಟಿವಿ ವಾಹಿನಿಗಳು ಹಣ ಮಾಡುವ ದಂಧೆಗೆ ಏನು ಹೇಳಬಹುದು. ತುಸು ಗಮನಿಸಿ ಇಲ್ಲಿರುವರ ಎಲ್ಲ ಫೋಟೋಗಳಲ್ಲಿ ನೋಡಿದಾಗ ಈ ನಿರೂಪಕಿಯರ ಬಗ್ಗೆ ಒಳ್ಳೆ ಭಾವನೆ ಮನಸ್ಸಿನಲ್ಲಿ ಹುಟ್ಟಬಹುದೇ? ಮನಸಿನ ಚಿಂತನೆಗೆ ಗ್ರಾಸವನ್ನು ಒದಗಿಸಬಲ್ಲ ಕಾರ್ಯಕ್ರಮಗಳು ಇವರಿಗೆ ಬೇಡ.. ಪ್ರೇಕ್ಷಕರನ್ನು ಅವರ ಮನಸನ್ನು ಭಾವನೆಗಳನ್ನು ಹುಚ್ಚೆಬ್ಬಿಸಿ ಜೇಬು ತುಂಬಿಸಿಕೊಳ್ಳುವ ಇವರಿಗೆ ಬುದ್ದಿ ಬರುವುದು ಯಾವಾಗ?

ಕನ್ನಡದ ಗಂಡು ಕಲೆ ಎಂದು ಕರೆಸಲ್ಪಡುವ ಯಕ್ಷಗಾನದಂತಹ ಶ್ರೀಮಂತ ಕಲೆಗೆ ಇಂದು ಯಾವ ಸ್ಥಿತಿ ಬಂದೊದಗಿದೆ. ಯಕ್ಷಗಾನ ಅಡಿಸುವವನು ದುಡ್ಡು ಮಾಡುವ ಉದ್ದೇಶದಿಂದ ಅಡಿಸುತ್ತಾನೆ ಎಂದು ಹೇಳುವ ಕಾಲ ಎಂದೋ ಕಳೆದು ಹೋಯಿತು.. ಏನೋ ಹುಚ್ಚು ಎಂದು ಹೇಳುವ ಕಾಲ ಈಗಯಕ್ಷಗಾನ ಇದ್ದರೆ ಕಲಾವಿದರೇ ಪ್ರೇಕ್ಷಕರಾಗಿ ಉಳಿವಂಥಹ ಸಂದಿಗ್ದ ಸ್ಥಿತಿಯಲ್ಲಿ ಯಕ್ಷಗಾನವಿದೆ. ಭರತನಾಟ್ಯ ಶಾಸ್ತ್ರೀಯ ಸಂಗೀತ ಇವರಿಗೆ ಬೇಡ. ಚಡ್ಡಿ ಹಾಕಿ ಮೈ ಕುಲುಕಿಸುವ ಕಾರ್ಯಕ್ರಮಗಳೇ ಬೇಕು.. ಅದಕ್ಕಾಗಿ ತಮ್ಮ ಕಂದಮ್ಮಗಳನ್ನು ಎಷ್ಟು ಖರ್ಚು ಮಾಡಿಯಾದರೂ ತರಬೇತಿ ಕೊಡಿಸುತ್ತಾರೆ. ಅದಕ್ಕಾಗಿ ರಿಯಾಲಿಟಿ ಶೋ ಎಂಬ ಅನರ್ಥ ಪರಂಪರೆ ಬೇರೆ.. ಸಂಗೀತ ಎಂದರೆ..ಅದು ಚಲನ ಚಿತ್ರ ಗೀತೆ ಮಾತ್ರ ..ಭಾಷಾಭಿಮಾನ ಇರುವುದು ಕನ್ನಡ ಚಲನ ಚಿತ್ರ ನೋಡಿದರೆ ಮಾತ್ರ ಎಂಬ ಹಾಗಿದೆ.ನಮ್ಮ ಸಾಂಸ್ಕೃತಿಕ ದೀವಾಳಿತನದ ದ್ಯೋತಕವೇ ಈಗಿನ ಟಿವಿ ಚಾನಲ್ ಗಳು ? ಅಲ್ಲ ರಾಯಭಾರಿಗಳೇ?

No comments:

Post a Comment